Saturday, April 27, 2013

Verity 14 : Vote???

ಮತ  ಹಿತ - ಪ್ರಜೆಗಳೇ ಮತದಾನದಂದು ತಪ್ಪದೇ ಮತ ಹಾಕಿ.
ಮತ ಪ್ರಜಾಪ್ರಭುತ್ವಕ್ಕೆ ಅದುವೇ ಹಿತ..
- ಪೇಪರಿನಲ್ಲಿ ಇದನ್ನು ಓದಿದಾಗ, ನಿಟ್ಟುಸಿರು ಬಿಟ್ಟ ಟೋನಿ.

ಬುದ್ದಿ ಬಂದಮೇಲೆ ನೆನಪಲ್ಲಿರೋ ಮೊದಲ ಪ್ರಧಾನಿ PVN. ಅದೂ ಪ್ರೈಮರಿ ಶಾಲೆಯಲ್ಲಿ ಬಾಯಿ ಪಾಠ  ಮಾಡಿ ಮೆದುಳಿನ ಯಾವುದೋ ಮೂಲೆಯಲ್ಲಿ ಶೇಕರಣೆಗೊಂಡ ಹೆಸರು.  ಬಾಲ್ಯವನ್ನು ನೆನಪಿಸಿಕೊಂಡ ಟೋನಿ.

ಅಚಾನಕ್ಕಾಗಿ ಯಾವುದೋ ಮಿನಿಸ್ಟರ್ ತೀರಿಕೊಂಡ ಸುದ್ದಿಯನ್ನು ಅಜ್ಜನ ರೇಡಿಯೋದಲ್ಲಿ ಕೇಳಿ, ಎಷ್ಟು ದಿನ ರಜೆ ಸಿಗುತ್ತದೆಯೋ ಎಂಬ ಯೋಚನೆಯಲ್ಲಿ ಮುಳುಗಿ, ಅದೇ ಗುಂಗಿನಲ್ಲಿ ನಾಳೆ ಶಾಲೆಗೆ ಹೋಗಿ, ಗೆಳೆಯರ ಕಣ್ಣಲ್ಲಿ ಅರಳಿದ ಕುಶಿಯನ್ನು ನೋಡಿ, ಮೇಸ್ಟ್ರು ಹೇಳಿದಾಗ ೧ ನಿಮಿಷ ಕಣ್ಣು ಮುಚ್ಚಿ, ಹಾಗೇ ಕಣ್ಣು ಮುಚ್ಚಿದಾಗ ಇನ್ನೇನು ಹೋಂವರ್ಕ್ ಕೊಡುತ್ತಾರೋ  ಎನ್ನುವ sub-ಯೋಚನೆಯಲ್ಲಿ ಮುಳುಗಿ, ಕಣ್ಣು ಬಿಟ್ಟು ನಂತರ ಮನೆ ಕಡೆ ಓಡುವಾಗ, ನಮ್ಮ ಮುಗ್ಧತೆಯನ್ನು ನೋಡಿ, ಸತ್ತವರ ಪ್ರಾಣಕ್ಕೂ ಒಂದು ಕ್ಷಣ, ಮುಕ್ತಿ ಹಾಳಾಗಲಿ, ಮತ್ತೆ ಮಕ್ಕಳಾಗಿ ಹುಟ್ಟಬೇಕೆನ್ನುವ ಆಸೆ ಮೂಡುತಿತ್ತೇನೋ!

ಟೋನಿಗೆ ಈಗ ಸುಮಾರು 30 ವರ್ಷ. ಬಿಸಿ ರಕ್ತ ತಣ್ಣಗಾಗಲು ಶುರುವಾಗುವ ಸಮಯ. ಟೋನಿಗೆ ತನ್ನದೇ ಆದ ವ್ಯವಹಾರಗಳಿವೆ. ಸಂಸಾರದ ಜವಾಬ್ದಾರಿಯೂ ಹೆಗಲ ಮೇಲಿದೆ. ಇದೆಲ್ಲದರ ನಡುವೆ, ಇತರೆ ವಿಷಯದ ಬಗ್ಗೆ ತಲೆ ಕೆಡಿಸಿಕೊಲ್ಲೋರು ಯಾರು? 'ವೋಟು ಹಾಕೋಕೆ ಊರಿಗೆ ಬರ್ತೀಯ?' ಎಂದು ತಂದೆ ಕೇಳಿದಾಗ, 'ಇಲ್ಲ' ಎಂಬ ಉತ್ತರ ಹೃದಯದಾಳದಿಂದ ಬಂತು.

ವೋಟು ಹಾಕುವ ದಿನ ಮತದಾರರ ಕೈ ಬೆರಳಿಗೆ ಮಸಿ ಬಳಿಯುವ ಸರ್ಕಾರ, ನಂತರ ತನ್ನ ಪೂರ್ತಿ ದೇಹಕ್ಕೆ ಮಸಿ ಬಳಿದುಕೊಳ್ಳುವುದು ಒಂದು ವಿಪರ್ಯಾಸ. ಈಗ ಕಾಲ ಬದಲಾಗಿದೆ. ಓದಿರದವರೂ ಕೂಡ ಟಿವಿ ನೋಡುತ್ತಾರೆ.
ರಾಜಕಾರಣಿಗಳು ಬಣ್ಣವಿಲ್ಲದ ಗೋಸುಂಬೆಗಳಂತೆ ಎಂದು ಅರಿವಾಗುತ್ತಾ ಇದೆ. ಆದ್ರೆ 4 ಜನ ಕಳ್ಳರಲ್ಲಿ ಒಬ್ಬ ಉತ್ತಮ ಕಳ್ಳನಿಗೆ ಮತ ಹಾಕೋ ಪರಿಸ್ಥಿತಿ ಈ ಪ್ರಜೆಗಳಿಗೆ !!

ಮೀಸಲಾತಿ, ಒಳ ಮೀಸಲಾತಿ, ಕೋಮುವಾದ-ವೋಟುಬ್ಯಾಂಕ್ ಎಂದು 50 ವರ್ಷ ಆಳಿದ ಕೆಟ್ಟ ಕೇಂದ್ರ ಸರ್ಕಾರಕ್ಕೆ, 'ಏನು ಮಾಡಿದ್ದೀರಿ? ಈ 50 ವರ್ಷಗಳಲ್ಲಿ?' ಎಂದು ಕೇಳಿದಾಗ - '50  ವರ್ಷದ ಹಿಂದೆ ದೇಶದ ಪರಿಸ್ಥಿತಿ ಹೇಗಿತ್ತು ಎಂದು ನಿನ್ನ ಅಪ್ಪನನ್ನೋ, ಅಜ್ಜನನ್ನೋ ಕೇಳು' ಎನ್ನುವ ತಿರಸ್ಕಾರದ ಕೇಕೆ !!
5 ವರ್ಷ ಬಾಳಿದ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಎಷ್ಟು ತಿಂದರೂ ಇನ್ನೂ ನೀಗದ ಹಸಿವು!!
ಎಲ್ಲರೂ ಒಂದೇ. - ಯಾರೋ ಹೇಳಿದಂತೆ ಇವರ zanda ಬೇರೆ agenda ಒಂದೇ!

ತಿನ್ನಿ, ತಿಂದು ಸಾಯಿರಿ. 'ಅಂತೂ ಸತ್ತನಲ್ಲ' ಎಂದು ಜನ ನಿಟ್ಟುಸಿರು ಬಿಡುವ ಕಾಲ ಬಂದಾಗಿದೆ!

1 comment:

Shashi said...

Good one Abhi....:)