Monday, June 21, 2010

Verity 5 - Humanity Deficiency

ಆಫ್ರಿಕಾನ್ ಚಿರತೆಯ ಕಣ್ಣು ಅಲ್ಲಿರುವ ಕಡವೆಗಳ ಗುಂಪನ್ನೇ ನೋಡುತ್ತಿತ್ತು.
ನನ್ನ ಕಣ್ಣು ಅನಿಮಲ್ ಪ್ಲಾನೆಟ್ ಚಾನೆಲ್ ನ್ನೇ ನೋಡುತ್ತಿತ್ತು.
ಅವರು ಹೇಳುವ ಪ್ರಕಾರ , ಆ ಚಿರತೆ , ಆ ಗುಂಪಿನಲ್ಲಿ ತನಗೆ ಸಿಗಬಲ್ಲ ಕಡವೆಯನ್ನು
ಹುಡುಕುತ್ತಿತ್ತು . ನಾವು ಹೋಟೆಲ್ನಲ್ಲಿ ಕುಳಿತು ಮೆನು ನೋಡುತ್ತಿರುವಂತೆ!

Attack.

ಎಲ್ಲ ಕಡವೆಗಳು ಚೆಲ್ಲಪಿಲ್ಲಿಯಾದವು . ಆದರೆ ಚಿರತೆ ತನ್ನ target ನ್ನು ಮಾತ್ರ
ಮಿಂಚಿನ ಓಟದಿಂದ ಓಡಿ ಹಿಡಿಯಿತು. ಜೀವಂತ ಕಡವೆಯ ಕತ್ತು ಚಿರತೆಯ ಹಲ್ಲಿನಲ್ಲಿ
ಸಿಕ್ಕಿಹಾಕಿ ಕೊಂಡಿತ್ತು .

ಅದು ಕಾಡಿನ ನ್ಯಾಯ. ಅಲ್ಲಿ ಚಿರತೆಯ ಆಹಾರವೇ ಈ ಪಾಪದ ಪ್ರಾಣಿಗಳು.
ಅದನ್ನು ಬಿಟ್ಟರೆ ಚಿರತೆಗೆ ಉಳಿಗಾಲವಿಲ್ಲ .

ಆದರೆ ಈ ಮನುಷ್ಯ ಪ್ರಾಣಿಗೆ ಏನಾಗಿದೆ? ನಮಗೆ ತಿನ್ನಲು, ತಿಂದು ಬದುಕಲು ಏನೇನು ಇಲ್ಲ.

(ನಿಮಗೆ ಗೊತ್ತಿರಲಿ : ಸ್ವತಂತ್ರ ಬಂದ ಆರು ದಶಕಗಳ ನಂತರವೂ ,ಭಾರತದಲ್ಲಿ
28.7% ಜನ ಹಸಿವಿನಿಂದ ಬಳಲುತ್ತಿದ್ದಾರೆ . ಈ ಸೋನಿಯಾ ಕಾಂಗ್ರೆಸ್ ಅವಧಿಯಲ್ಲಿ,
ಹೊಸ ಸಮೀಕ್ಷೆಯ ಪ್ರಕಾರ 37.2% ಜನ ಕಡುಹಸಿವಿನಿಂದ ಬಳಲುತ್ತಿದ್ದಾರೆ !
refer - vijaya karnataka, 21/06/2010, 9th page, article by Dr. Hilda Raja)


ಬಗೆ ಬಗೆಯ ತರಕಾರಿಗಳು , ಹಣ್ಣುಗಳು , ಸೊಪ್ಪು , ಸಾಂಬಾರು ಪದಾರ್ಥಗಳು.
ಅಕ್ಕಿ, ಜೋಳ, ಗೋಧಿ, ರವೆ - ಹೀಗೆ ಎಸ್ಟೊಂದು ವೈವಿದ್ಯ ಊಟಗಳು,
ಬಗೆ ಬಗೆಯ ಸಿಹಿ,ಕಾರದ ತಿಂಡಿಗಳು ಇರುವಾಗ ,ಪಾಪದ ಪ್ರಾಣಿಗಳನ್ನು ತಿನ್ನುವುದು
ಎಷ್ಟರ ಮಟ್ಟಿಗೆ ಸರಿ?

ಮನುಷ್ಯ ಅಕ್ಷರಶ ಕ್ರೂರಿಯಾಗಿದ್ದಾನೆ. ಕಾಡನ್ನೆಲ್ಲ ಕಡಿದು, ಅದರೊಳಗಿನ ಚಿರತೆ,
ಸಿಂಹ, ಹುಲಿಗಳನ್ನು zoo ನಲ್ಲಿ ಬಂದಿಸಿ, ಈಗ 'Save Tiger' ಎಂದು
ಟೀವಿಯಲ್ಲಿ add ಕೊಡ್ತಾರೆ! ಹಾಗೆ ಮಾಡಿದರೆ Tiger ಸೇವ್ ಆಗಿ ಬಿಡುತ್ತಾ?
ಅಷ್ಟಕ್ಕೂ Tigerನ್ನು ಸೇವ್ ಮಾಡಿ ಆಗಬೇಕಾಗಿದ್ದು ಏನಿದೆ?
ಅದು ಮನುಷ್ಯನಿಗೆ ಯಾವ ರೀತಿ ಉಪಕಾರಿ ? ನಮ್ಮ ಮಕ್ಕಳು, ಮರಿ ಮಕ್ಕಳು
ಅದನ್ನ ನೋಡ್ಬೇಕು ಅಂತ ತಾನೇ?
ಸರಿ, ಅವರದನ್ನು ನೋಡ್ತಾರೆ ಅಂತಾನೆ ಇಟ್ಕೊಳ್ಳಿ , ಆಮೇಲೆ ಅದರಿಂದ use ಏನು ?

ಮೊನ್ನೆ , ಈ so called ಬುದ್ದಿ ಜೀವಿಗಳೆಲ್ಲ ಸೇರಿ ಒಂದು ಕಾರ್ಯಕ್ರಮ ವನ್ನು ಮಾಡಿದರು .
ನಿಜವಾಗಿ ನೋಡಿದರೆ ಅದು ಕಾರ್ಯಕ್ರಮ ವಲ್ಲ . ಕ್ರಮವಲ್ಲದ ಕಾರ್ಯ .
"ಗೋಹತ್ಯೆ ನಿಷೇಧ " ವಿರೋಧಿಸಿ ಮಾಡಿದ ಒಂದು ನಾಟಕ .

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ 60ನೆ ವಯಸ್ಸಿಗೆ ಅರಳು-ಮರಳು ಆಗುತ್ತದೆ,
ಆದರೆ, ಈ ಅನಂತಮೂರ್ತಿ ಅವರಿಗೆ ಹುಟ್ಟು ಅರಳು -ಮರಳು.
ಅವರಿಗೆ ಜ್ಞಾನ ಪೀಟ ಬಂದಿದ್ದು , ಗೌಡರಿಗೆ PM ಪೀಟ ದೊರೆತ ಹಾಗೆಯೇ ಆಕಸ್ಮಿಕ
ಅಂತ ನನ್ನ ಅನಿಸಿಕೆ .

ಇದು ನೂರಾರು ಜನರ ಅಭಿಪ್ರಾಯವು ಹೌದು .

ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ ಯವರ ಸಾಲಿನಲ್ಲಿ ಈತ ಯಾವ ರೀತಿ ಫಿಟ್ ಆಗುತ್ತಾರೆ ?

ದಿನವೂ 40 ಲಕ್ಷ ಲೀಟರ್ ನಸ್ಟು ಗೋವಿನ ಹಾಲನ್ನು ನಮ್ಮ ರಾಜ್ಯದಲ್ಲಿ ಕುಡಿಯುತ್ತಾರೆ .
ಈ ಅನಂತಮೂರ್ತಿಯು ಕುಡಿದಿರುತ್ತಾರೆ. ಬಹುಷಃ ಟೀವಿ ಯಲ್ಲಿ 'Save Cattle' ಎಂದು
ತೋರಿಸಿದರೆ ಮಾತ್ರ ಈ ಜ್ನಾನ ಪೀಟಕ್ಕೆ ಜ್ಞಾನ ಬರಬಹುದು?

'ಗೋಹತ್ಯೆ ನಿಷೇದದ ಹಿಂದೆ ಕೋಮುವಾದದ ನೆರಳು ಇದೆ ' ಎಂದರು ಈತ .
ಇವರಿಗೆ ಅದರ ಹಿಂದಿರುವ ಮಾನವೀಯತೆ ಕಾಣಿಸುವುದಿಲ್ಲ ಯಾಕೆ ?.
'ಕಾಮಾಲೆ ಕಣ್ನವರಿಗೆ ಕಾಣಿಸುವುದೆಲ್ಲ ಹಳದಿ'.

ಗುರುಗಳೇ , ರೇಷನ್ ಕಾರ್ಡ್ ತೋರಿಸಿದರೆ ಅಕ್ಕಿ, ಬೇಳೆ ಕೊಡುತ್ತಾರೆಯೇ ಹೊರತು ಚಿಕನ್/ಬೀಫ್ ಅಲ್ಲ.
ತಿನ್ನಲು ಬೇಕಾದಷ್ಟು ಇರಬೇಕಾದರೆ ಇವರಿಗೆ ದನದ ಮಾಂಸವೇ ಬೇಕಾ ?

ಇನ್ನು 'zooನಲ್ಲಿದ ಪ್ರಾಣಿಗಳಿಗೆ ಏನು ಹಾಕುತ್ತೀರಿ?' ಎನ್ನುವ ಪ್ರಶ್ನೆಗೆ ,
'ಅವುಗಳನ್ನು zoo ನಲ್ಲಿ ಏಕೆ ಇಟ್ಟಿದ್ದೀರಿ?' ಎನ್ನುವ ನನ್ನ ಪ್ರಶ್ನೆಯೇ ಉತ್ತರ.

(ಓದಿದ ನಿಮ್ಮಲ್ಲೂ ನನ್ನ ವಿನಂತಿ . ಕಟುಕರಾಗಬೇಡಿ, Be vegetarian
and save those innocent lives.)

1 comment:

Shashi said...

Haaa...Good Article Abhi... :)